ಗ್ರಾಮದ ನಿವಾಸಿಯಾದ ಗಂಗರಾಜು ಅವರು ಕಳೆದ ಐದಾರು ತಿಂಗಳಿನಿಂದ ವಿದ್ಯುತ್ ಸಂಪರ್ಕಕ್ಕಾಗಿ ಅಲೆದಾಡುತ್ತಿದ್ದಾರೆ. ಪ್ರತಿನಿತ್ಯ ಒಂದೊಂದು ಕಾರಣವನ್ನು ಬೆಸ್ಕಾಂ ಸಿಬ್ಬಂದಿ ನೀಡುತ್ತಿದ್ದಾರೆ. ಲೇಔಟ್ ಮಾಡುವವರಿಗೆ ಒಂದು ವಾರದಲ್ಲಿ ಮೀಟರ್ ಕೊಡುತ್ತಾರೆ. ಬಡವರಿಗೆ ವರ್ಷವಾದರೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ. ಬಡವರ ಹತ್ತಿರ ಸಹಾಯಕ ಎಂಜಿನಿಯರ್ ಲಂಚ ಕೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.