ಸೀರೆ ಸಂದ್ರ, ಬ್ಯಾತ, ಕಾಕೋಳು, ಬುಡವನಹಳ್ಳಿ, ಕುಂಬಾರಹಳ್ಳಿ, ಚಲ್ಲಹಳ್ಳಿ ಗ್ರಾಮಗಳ ಕೆರೆಗಳ ತಳಮಟ್ಟದಲ್ಲಿ ನೀರು ಸಂಗ್ರಹಗೊಂಡಿದೆ. ಈ ಭಾಗದಲ್ಲಿ ನಿಷ್ಕ್ರೀಯಯಗೊಂಡಿದ್ದ ಅನೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ಚಿಮ್ಮಿ ಬಂದಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಟೊಮೆಟೊ, ಮೆಣಸಿನಕಾಯಿ, ಬೀಟ್ ರೂಟ್, ಬದನೇಕಾಯಿ ಗಿಡಗಳನ್ನು ರೈತರು ನೆಡುತ್ತಿದ್ದಾರೆ.