‘ರಾಜ್ಯ ಗುಪ್ತದಳಕ್ಕೆ ಸೇರಿದ ತುಮಕೂರಿನ ಇನ್ಸ್ಪೆಕ್ಟರ್ ಆಫ್ ಪೋಲಿಸ್ ಮತ್ತು ಇಬ್ಬರು ಮುಖ್ಯ ಕಾನ್ಸ್ಟೆಬಲ್ಗಳು ಕರೆ ಮಾಡಿ ಅರ್ಜಿದಾರರಿಗೆ ಮಾಹಿತಿ ಕೇಳಿದ್ದಾರೆ. 2019ರ ಆಗಸ್ಟ್ 27ರಂದು ಈ ಕರೆ ಮಾಡಲಾಗಿದೆ’ ಎಂಬ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಫೋನ್ ಮಾಡಿ ಅರ್ಜಿದಾರರಿಗೆ ಏಕೆ ಕೇಳಬೇಕಿತ್ತು, ಸರ್ಕಾರದ ಇಲಾಖೆಯಿಂದಲೇ ಪಡೆಯಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿತು.