ವಿಚಾರಣೆ ವೇಳೆ ವಕೀಲ ಡಿ.ಆರ್.ರವಿಶಂಕರ್ ಅವರು, ‘ಅಪಾರ್ಟ್ಮೆಂಟ್ ಖರೀದಿಗೆ ಅಗತ್ಯವಾದ ಸೇಲ್ ಡೀಡ್, ಖಾತೆ, ಎನ್ಕಂಬರೆನ್ಸ್... ಇತ್ಯಾದಿ ನಕಲಿ ದಾಖಲೆಗಳನ್ನೇ ತಯಾರು ಮಾಡುವ ಜಾಲವಿದೆ. ಇದರ ಸೂತ್ರಧಾರನ ವಿರುದ್ಧ ನಾನು ದೂರು ನೀಡಿದರೆ ಪೊಲೀಸರು ನನ್ನ ವಿರುದ್ಧವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಹೊರಿಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕು’ ಎಂದು ಕೋರಿದರು.