‘ನೋ ವಾಟರ್-ನೋ ಮನಿ’ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಾದ್ಯಂತ ಸುಮಾರು ಆರು ಸಾವಿರ ಕೊಳವೆ ಬಾರಿ ಕೊರೆಯಿಸಲು 31 ಪ್ಯಾಕೇಜ್ಗಳ ಗುತ್ತಿಗೆಗೆ ಅರ್ಜಿ ಆಹ್ವಾನಿಸಿ ಡಿ.ದೇವರಾಜು ಅರಸ್ ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮ 2018ರ ಡಿಸೆಂಬರ್ 12ರಂದು ಅಧಿಸೂಚನೆ ಹೊರಡಿಸಿತ್ತು. ನಂತರ 31 ಪ್ಯಾಕೇಜ್ ಅನ್ನು 12 ಪ್ಯಾಕೇಜ್ಗಳ ಗುತ್ತಿಗೆಗೆ ಇಳಿಕೆ ಮಾಡಿ 2019ರ ಜನವರಿ 4ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.