ಮೈಸೂರಿನ ಭಾಗ್ಯ ಮತ್ತು ಜಯಲಕ್ಷ್ಮಿ ನಡುವಿನ ವ್ಯಾಜ್ಯದಲ್ಲಿ, ಭಾಗ್ಯ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಭಾಗ್ಯ ಅವರ ಪರವಾಗಿ ಪಿ.ಪ್ರಸನ್ನಕುಮಾರ್ ವಕಾಲತ್ತು ವಹಿಸಿದ್ದರು. ಬುಧವಾರ ಅರ್ಜಿದಾರರು ಮತ್ತು ಪ್ರತಿವಾದಿಗಳು, ‘ನಾವು ಪರಸ್ಪರ ರಾಜಿಯಾಗಿದ್ದೇವೆ, ಪ್ರಕರಣ ಹಿಂಪಡೆಯುತ್ತೇವೆ’ ಎಂದು ನ್ಯಾಯಪೀಠಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದರು.