ಹೊಸಕೋಟೆ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯೆ ಪೂರ್ಣಿಮಾ ಶೇಖರ್ (40) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟರು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಅವರು ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿನ ಮಿದುಳು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಲು ನ.22 ರಂದು ಬಸ್ನಲ್ಲಿ ಬಂದಿದ್ದರು.
ಬಸ್ ಇಳಿದು ರಸ್ತೆ ದಾಟುವಾಗ ಕೋಲಾರದ ಕಡೆಯಿಂದ ಹೊಸಕೋಟೆ ಕಡೆ ಹೋಗುತ್ತಿದ್ದ ಟೆಂಪೋ ಡಿಕ್ಕಿ ಹೊಡೆದು ಅವರಿಗೆ ತೀವ್ರ ಪೆಟ್ಟಾಗಿತ್ತು.