ಬೆಂಗಳೂರು: ‘ವಕೀಲೆ ಧರಣಿ ಅವರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ಆರೋಪಿ ಮಹಾನಗರ ಪಾಲಿಕೆ ಸದಸ್ಯ ಸುರೇಶ್ ಅವರನ್ನು ಬಂಧಿಸ ಬೇಕು’ ಎಂದು ಅಖಿಲ ಭಾರತ ವಕೀಲರ ಸಂಘದ ಹೊಸಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಹರೀಂದ್ರ ಆಗ್ರಹಿಸಿದರು.
‘ಆರೋಪಿ ಸುರೇಶ್, ವಕೀಲೆ ಧರಣಿ ವಾಸವಾಗಿದ್ದ ಮನೆಯನ್ನು ಕಬಳಿಸಲು ಯತ್ನಿಸುತ್ತಿದ್ದ. ಈ ಕಿರುಕುಳ ತಾಳ ಲಾರದೆ ಧರಣಿ ಡಿ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.