ಲೋಕನೀತಿ ಸಂಸ್ಥೆಯ ಸಹ ಸಂಸ್ಥಾಪಕ ಸುಹಾಸ್ ಪಲ್ಶಿಕರ್, ‘ರಾಷ್ಟ್ರೀಯ ಚಳವಳಿಯ ಭಾರತವನ್ನು 2014ರ ಚುನಾವಣೆಯಲ್ಲಿ ಪಕ್ಕಕ್ಕೆ ತಳ್ಳಲಾಯಿತು. ನವಭಾರತ ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತರಲಾಯಿತು. 2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದರೆ, ನವಭಾರತದ ಆಲೋಚನಾ ಕ್ರಮ, ಸಾಮಾಜಿಕ ಸಂಬಂಧಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ’ ಎಂದು ಅಭಿಪ್ರಾಯಪಟ್ಟರು.