‘ದೆಹಲಿಯಲ್ಲಿ ಪ್ರತಿಭಟನಕಾರರು ದುಂಡಾವರ್ತಿ ಪ್ರದರ್ಶಿಸಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಪೊಲೀಸರು ಸಂಶೋಧನಾ ವಿದ್ಯಾರ್ಥಿಗಳನ್ನು ಅಪರಾಧಿಗಳನ್ನು ನಡೆಸಿಕೊಳ್ಳುವಂತೆ ನಡೆಸಿಕೊಂಡರು. ಸಾವಿರಾರು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಅವರು, ನಮ್ಮನ್ನು ದುಷ್ಕರ್ಮಿಗಳಂತೆ ನಡೆಸಿಕೊಂಡಿದ್ದು ಏತಕ್ಕೆ? ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ಕೇಳುವ ಅಧಿಕಾರವಿದೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.