ಬೆಂಗಳೂರು: ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ದ ಮೂರನೇ ದಿನವಾದಭಾನುವಾರ ಲಾಲ್ಬಾಗ್ ಉದ್ಯಾನದತ್ತ ಜನಸಾಗರ ಹರಿದು ಬಂತು.
ಶುಕ್ರವಾರ ಹಾಗೂ ಶನಿವಾರಗಳಿಗೆ ಹೋಲಿಸಿದರೆ ಭಾನುವಾರ ವೀಕ್ಷಕರ ಪ್ರಮಾಣ ಹೆಚ್ಚಾಗಿದ್ದು, ಉದ್ಯಾನಕ್ಕೆ 60,500 ಮಂದಿ ಭೇಟಿ ನೀಡಿ ಹಸಿರು ಸಿರಿಯನ್ನು ಕಣ್ತುಂಬಿಕೊಂಡರು.
ತುಂತುರು ಮಳೆಯ ನಡುವೆಯೂ ಜನರು ಗಾಜಿನ ಮನೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಜಯಚಾಮರಾಜ ಒಡೆಯರ್ ಪ್ರತಿಮೆ ಎದುರು ನಿಂತು ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಗಾಜಿನ ಮನೆಯಲ್ಲಿ ಸಾಲುಗಟ್ಟಿ ನಿಂತಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 5ರಿಂದ 6ಗಂಟೆಯವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಜನ ಭೇಟಿ ನೀಡಿದರು. ‘ನೀರಿನ ಸಂರಕ್ಷಣೆಗಾಗಿ ಅರಣ್ಯ ಉಳಿಸಿ’ ಎಂಬ ಫಲಕ ಹಿಡಿದು ಜೈನ್ ಕಾಲೇಜಿನ ಯುವಕರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಬಕ್ರೀದ್ ಪ್ರಯುಕ್ತ ಸರ್ಕಾರಿ ರಜೆ ಇರುವ ಕಾರಣಸೋಮವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಫಲಪುಷ್ಪ ಪ್ರದರ್ಶನಕ್ಕೆ ಬರುವ ನಿರೀಕ್ಷೆ ಇದೆ.