‘ಈವರೆಗೂ ಪಡಿತರ ಚೀಟಿಯನ್ನೂ ಹೊಂದಿರದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದಾರೆ. ಅಬ್ದುಲ್ಲಾ ಹಾಗೂಮುಫ್ತಿ ಮೊಹಮ್ಮದ್ ಮನೆತನಗಳು ಅಧಿಕಾರವನ್ನು ತಮ್ಮಲ್ಲಿಯೇ ಕೇಂದ್ರೀಕರಿಸಿಕೊಂಡಿದ್ದವು. ಸರ್ಕಾರದ ಸೌಲಭ್ಯವನ್ನು ನೀಡದೆ ಜನರನ್ನು ವಂಚಿಸಿದ್ದವು. ಈಗ ವಿಶೇಷಾಧಿಕಾರ ರದ್ದಾಗಿದ್ದರಿಂದ ಕಾನೂನುಬಾಹಿರವಾಗಿ ಜನಸಾಮಾನ್ಯರ ಮೇಲೆ ಅಧಿಕಾರ ಚಲಾಯಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ಅವರು ವಿರೋಧಿಸುತ್ತಿದ್ದಾರೆ.ಕೇಂದ್ರಾಡಳಿತ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಅಭಿವೃದ್ಧಿ, ದೃಢತೆ ಹಾಗೂ ಸಬಲೀಕರಣಕ್ಕೆ ಆದ್ಯತೆ ಸಿಗಲಿದೆ’ ಎಂದರು.