ಆಕಾಶವಾಣಿ ನಿಲಯ ನಿರ್ದೇಶಕ ಜಿ.ಕೆ.ರವಿಕುಮಾರ್, 'ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಆಕಾಶವಾಣಿ ಜಾನಪದ ಕಲಾವಿದರ ತವರು. ಮುಖ್ಯವಾಹಿನಿಗೆ ಬಾರದ ಬುಡಕಟ್ಟು ಸಮುದಾಯದವರನ್ನು ಗುರುತಿಸಿ ಅವರಿಂದ ಜಾನಪದ ಗೀತೆಗಳನ್ನು ಸಂಗ್ರಹಿಸುತ್ತಿದ್ದೇವೆ. ಅವುಗಳನ್ನು ಇಂಗ್ಲಿಷ್ ಭಾಷೆಗೂ ಅನುವಾದ ಮಾಡುವ ಚಿಂತನೆ ಇದೆ’ ಎಂದರು.