ಪರಿಷತ್ ಅಧ್ಯಕ್ಷ ಮನು ಬಳಿಗಾರ್, 'ರಾಜ್ಕುಮಾರ್ ಕನ್ನಡದ ಕಣ್ಮಣಿ. ಆ ಸ್ಥಾನ ತುಂಬಲು ಶಿವಣ್ಣರನ್ನು ಬಿಟ್ಟರೆ ಮತ್ಯಾರಿಂದಲೂ ಸಾಧ್ಯವಿಲ್ಲ. ಇಂದು ಇಂಗ್ಲಿಷ್ ಮಾಧ್ಯಮ ವಿರೋಧಿಸಿ ಎಲ್ಲ ಹೋರಾಡಿದರೂ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲ. ರಾಜ್ಕುಮಾರ್ ಈಗಿದ್ದಿದ್ದರೆ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಬಿಡುತ್ತಿರಲಿಲ್ಲ. ಸರ್ಕಾರವೂ ಅವರ ಮಾತನ್ನು ಮೀರುತ್ತಿರಲಿಲ್ಲ’ ಎಂದು ಹೇಳಿದರು.