ಪೀಣ್ಯದಾಸರಹಳ್ಳಿ: ಲಗ್ಗೆರೆ ವಾರ್ಡ್(69)ನ ಪಾಲಿಕೆ ಸದಸ್ಯೆ ಮಂಜುಳಾ ಅವರ ಪತಿ ಜೆಡಿಎಸ್ ಮುಖಂಡ ನಾರಾಯಣಸ್ವಾಮಿ ತಮ್ಮ ಹುಟ್ಟುಹಬ್ಬದ ದಿನದಂದೇ ಬಿಜೆಪಿಗೆ ಸೇರ್ಪಡೆಯಾದರು. ಅವರನ್ನು ಶಾಸಕ ಆರ್.ಅಶೋಕ್ ಬರಮಾಡಿಕೊಂಡರು.
‘ಬಿಜೆಪಿ ತತ್ವ ಸಿದ್ಧಾಂತಗಳನ್ನು ನಂಬಿ ನಾರಾಯಣಸ್ವಾಮಿ ಪಕ್ಷಕ್ಕೆ ಬಂದಿರುವುದು ಸಂತಸದ ವಿಚಾರ’ ಎಂದರು.
ನಾರಾಯಣಸ್ವಾಮಿ, ‘ಈಗ ಮೋದಿ ಪರ ಮತ್ತು ವಿರುದ್ಧದ ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ. ಸಮಾಜ ಕಟ್ಟಲಿಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಒಂದೇ ಕುಟುಂಬದ ರಾಜಕಾರಣ ಮತ್ತೊಂದೆಡೆ ಇದೆ. ಮೋದಿ ಅವರ ಕಾರ್ಯದಕ್ಷತೆ ಹಾಗೂ ಕಾರ್ಯವೈಖರಿಯನ್ನು ಮೆಚ್ಚಿಕೊಂಡು ಬಿಜೆಪಿ ಸೇರಿದ್ದೇನೆ’ ಎಂದು ಹೇಳಿದರು.