ಸುಬ್ರಹ್ಮಣ್ಯ ದೇವರ ಕುರಿತ ಬೇರೆ ಬೇರೆ ಸಾಹಿತ್ಯಗಳನ್ನು ಉಲ್ಲೇಖಿಸಿ ವಿಚಾರ ಮಂಡಿಸಿದ ಪ್ರೊ.ವಾಸುದೇವ ಬಡಿಗೇರ, ‘ಸುಬ್ರಹ್ಮಣ್ಯಗೆ ಸ್ಕಂದ, ಕುಮಾರಸ್ವಾಮಿ, ಮುರುಗನ್, ಕಾರ್ತಿಕೇಯನ್ (ಶ್ರೀಲಂಕಾದಲ್ಲಿ) ಹೀಗೆ ಹಲವು ಹೆಸರುಗಳಿವೆ. ಬೌದ್ಧ ಸಾಹಿತ್ಯದಲ್ಲಿ ಈ ದೇವರು ಸಾಮಾನ್ಯ ಮನುಷ್ಯನಾಗಿ ಕಾಣುತ್ತಾನೆ. ಜೈನ ಸಾಹಿತ್ಯದಲ್ಲೂ ಈ ದೇವರ ಉಲ್ಲೇಖವಿದೆ. ತಾತ್ವಿಕವಾಗಿ ಈ ಸಾಹಿತ್ಯಗಳಲ್ಲಿ ಭಿನ್ನತೆ ಇದ್ದರೂ ಎಲ್ಲಿಯೂ ಒಂದನ್ನೊಂದು ಖಂಡಿಸುವುದಿಲ್ಲ’ ಎಂದು ವಿವರಿಸಿದರು.
**