ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗ ನವೆಂಬರ್ 23ರಿಂದ 26ರವರೆಗೂ ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲುರಂಗ ಮಂಟಪದಲ್ಲಿ ಕಡಲೆಕಾಯಿ ಪರಿಷೆ ಹಾಗೂ ಹುಣ್ಣಿಮೆ ಹಾಡು ಕಾರ್ಯಕ್ರಮ ಏರ್ಪಡಿಸಿದೆ.
‘ಕಡಲೆಕಾಯಿ ಪರಿಷೆ ಕಾರ್ಯಕ್ರಮವನ್ನು ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಲಿದ್ದಾರೆ. ನವಾಮಿ ಮಲ್ಲೇಶ್ವರ ಶಿವದೀಪೋತ್ಸವ ಕಾರ್ಯ ಕ್ರಮಕ್ಕೆ ಕೋಡಿ ಮಠ ಮಹಾಸಂಸ್ಥಾನ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ’ ಎಂದು ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ಉದಯೋನ್ಮುಖ ಕಲಾವಿದರಿಗೆ ಉತ್ತೇಜನ ನೀಡಲು ಇದೇ ಮೊದಲ ಬಾರಿಗೆ ‘ಚಿತ್ರ ಪರಿಷೆ’ ಆರಂಭಿಸಲಾಗಿದೆ. ಬದುಕಿನ ನೋವು, ಪರಿಸರ, ಸಂಸ್ಕೃತಿಯ ಕಾಳಜಿಯ ಪ್ರತಿಬಿಂಬವಾಗಿ ಕಲಾ ಉತ್ಸವ ನಡೆಯಲಿದೆ’ ಎಂದು ಅವರು ಹೇಳಿದರು.