‘ಘಟನೆ ನಡೆದ ರಂಗಮಂದಿರದ ಮೇಲ್ಭಾಗದಲ್ಲಿ ರಾಷ್ಟ್ರೀಯ ನಾಟಕ ಶಾಲೆಯು ಅನಧಿಕೃತವಾಗಿ ತಾತ್ಕಾಲಿಕ ರಂಗಮಂದಿರವನ್ನು ಇಲಾಖೆಯ ಅಥವಾ ರವೀಂದ್ರ ಕಲಾಕ್ಷೇತ್ರ ಆಡಳಿತದ ಗಮನಕ್ಕೆ ತಾರದೇ ನಿರ್ಮಿಸಿಕೊಂಡಿದೆ. ಘಟನೆ ನಡೆದ ಸ್ಥಳದಿಂದ ವೈರ್ಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಸಕ್ಷಮ ಪ್ರಾದಿಕಾರದ ಅನುಮತಿ ಪಡೆಯದೇ ಎಳೆಯಲಾಗಿದ್ದು, ಈ ಕೆಲಸದಿಂದಾಗಿ ಆಗಿರುವ ತಾಂತ್ರಿಕ ವ್ಯತ್ಯಾಸಗಳಿಂದ ಅಗ್ನಿ ಅನಾಹುತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ’ ಎಂದು ಮಿರ್ಜಿ ತಿಳಿಸಿದ್ದಾರೆ.