ಸ್ವತಃ ಶ್ರೀಕಂಠಯ್ಯ ಅವರೇ ನ್ಯಾಯಾಲಯಕ್ಕೆ ಹಾಜರಾಗಿ, 38 ಗುಂಟೆ ಜಾಗವು ಹನುಮಂತರಾಯಪ್ಪ ಅವರಿಗೆ ಸೇರತಕ್ಕದ್ದು ಎಂದು ಲಿಖಿತ ಹೇಳಿಕೆ ನೀಡಿದರು. ಐದು ವರ್ಷಗಳ ಕಾಲ ವಿಚಾರಣೆ ಮಾಡಿದ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿ ಬಿ.ನಾಗರಾಜ್ ಅವರು 38 ಗುಂಟೆ ಜಾಗವು ಹನುಮಂತರಾಯಪ್ಪ ಅವರಿಗೆ ಸೇರತಕ್ಕದ್ದು ಎಂದು ಆದೇಶವನ್ನು ನೀಡಿದರು. ಈ ಆದೇಶದ ಮೇಲೆ ಹಕ್ಕುಪತ್ರ ನೀಡಲಾಯಿತು.