‘ನೇಮಕಾತಿಗಾಗಿ ನಡೆದ ಪರೀಕ್ಷೆಯ ಕೀ ಉತ್ತರದಲ್ಲಿ ಭಾರಿ ಗೊಂದಲ ಮತ್ತು ತಪ್ಪು ಇದ್ದ ವಿಷಯಗಳಲ್ಲಿ ಕನ್ನಡವೂ ಒಂದಾಗಿತ್ತು. ಹಲವರು ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದು ಇದೇ ವಿಷಯದಲ್ಲಿ. ನಿವೃತ್ತ ಐಎಎಸ್ ಅಧಿಕಾರಿ ಬಿ. ಎ. ಹರೀಶ್ ಗೌಡ ಅವರು ಪರಿಶೀಲನೆ ನಡೆಸಿ ಕನ್ನಡದಲ್ಲಿ ನಾಲ್ಕು ಉತ್ತರಗಳಿಗೆ ಸರಿ ಉತ್ತರವನ್ನು ನಮೂದಿಸಿ, ಅದರಂತೆ ಅಂಕ ನೀಡಿ ಪಟ್ಟಿ ಪ್ರಕಟಿಸಬಹುದು ಎಂದು ಶಿಫಾರಸು ಮಾಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಈ ತಪ್ಪನ್ನು ಸರಿಪಡಿಸದೆ, ಈ ಮೊದಲು ಪ್ರಕಟಿಸಿದ್ದಪಟ್ಟಿಯನ್ನೇ ಯಥಾವತ್ತಾಗಿ ಪ್ರಕಟಿಸಲಾಗಿದೆ. ಅನ್ಯಾಯ ಹಾಗೆಯೇ ಸಮಾಧಿಯಾಗಿದೆ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.