ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿಯ ಗತಿ ಬದಲಾಗುತ್ತದೆ. ಈ ವಿಷಯವನ್ನು ಅರಿತಿರುವ ಕೇಂದ್ರ ಸರ್ಕಾರ ಹಲವಾರು ಆರೋಗ್ಯ ಯೋಜನೆಗಳನ್ನು ರೂಪಿಸಿದೆ. ಜನೌಷಧಿ ಮಳಿಗೆ ಸ್ಥಾಪನೆ, ಜೀವ ರಕ್ಷಕ ಔಷಧಗಳ ಬೆಲೆಯಲ್ಲಿ ಮಾಡಿರುವ ಗಣನೀಯ ಇಳಿಕೆಯಿಂದ ಸಮಗ್ರ ಜನತೆ ಅತಿ ಕಡಿಮೆ ದರದಲ್ಲಿ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು. ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ, ಬಂಜೆತನದಂತಹ ಹಲವು ಕಾಯಿಲೆಗಳಿಗೆ ಆಯುರ್ವೇದದಿಂದ ಶಾಶ್ವತ ಪರಿಹಾರ ದೊರಕಲಿದೆ ಎಂದರು.