‘ತೊಗಟೆ ಕತ್ತರಿಸಿರುವ ಮರಗಳಿಗೆ ಜೇನು ಮೇಣ ಹಾಗೂ ಕಿತ್ತಳೆ ಎಣ್ಣೆ ಬಳಸಿ ತಯಾರಿಸಿದ ಮುಲಾಮು ಹಚ್ಚಿದ್ದೇನೆ. ಈ ಲೇಪನವು ಅವುಗಳಿಗೆ ಸೋಂಕು ತಗುಲದಂತೆ ತಡೆಯುತ್ತದೆ. ಸಿಪ್ಪೆ ಎದ್ದಿರುವ ಜಾಗದಲ್ಲಿ ತೇವಾಂಶ ಕಾಪಾಡಿಕೊಂಡರೆ ಈ ಮರಗಳನ್ನು ಉಳಿಸಿಕೊಳ್ಳಬಹುದು. ನೀಲಗಿರಿ ಮರಗಳು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳಲಿವೆ. ಆದರೆ, ಹಳದಿ ಗುಲ್ಮೊಹರ್ ಮರವನ್ನು ಉಳಿಸಿಕೊಳ್ಳುವುದು ತುಸು ಕಷ್ಟ’ ಎಂದರು.