ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಎಐಸಿಸಿ ವಕ್ತಾರೆ ಖುಷ್ಬು ಅವರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದರು.
ಮಧ್ಯಾಹ್ನ 3.30ರ ಸುಮಾರಿಗೆ ಗೌತಮಪುರದಲ್ಲಿ ಮತಯಾಚನೆ ಮಾಡುತ್ತಿದ್ದ ಖುಷ್ಬು, ಏಕಾಏಕಿ ಹಿಂದೆ ತಿರುಗಿ ಯುವಕನ ಕೆನ್ನೆಗೆ 2 ಸಲ ಬಾರಿಸಿದರು. ನಂತರ ಪೊಲೀಸ್ ಅಧಿಕಾರಿ ಯೊಬ್ಬರೂ ಅವನಿಗೆ ಹೊಡೆದು ಕಳುಹಿಸಿದರು.
‘ನೂಕುನುಗ್ಗಲಿನಲ್ಲಿ ಯುವಕ ಅನುಚಿತ ರೀತಿಯಲ್ಲಿ ವರ್ತಿಸಿದ’ ಎಂದು ಖುಷ್ಬು ಹೇಳಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.