‘ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ್ದ. ಕಾರಿನಲ್ಲೆಲ್ಲ ಖಾರದ ಪುಡಿ ಚೆಲ್ಲಿ, ಅದರ ಘಾಟಿನಿಂದ ಉಸಿರಾಟಕ್ಕೆ ತೊಂದರೆ ಆಗಿದ್ದರಿಂದ ಆರೋಪಿ, ಕಾರಿನ ಬಾಗಿಲು ತೆರೆದಿದ್ದ. ಆಗ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಆಟೊ ಚಾಲಕರೊಬ್ಬರ ಬಳಿ ಹೋಗಿ ಸಹಾಯ ಕೇಳಿದ್ದಳು. ಆಟೊ ಚಾಲಕರೇ ಪೋಷಕರಿಗೆ ಕರೆ ಮಾಡಿ ಮನೆಗೆ ತಲುಪಿಸಿದ್ದಾರೆ’ ಎಂದು ವಿವರಿಸಿದರು.