ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕೇಂದ್ರ ಕಚೇರಿಯ ರಿಲಯನ್ಸ್ನ ದೂರವಾಣಿ ಸಂಪರ್ಕ 3–4 ದಿನಗಳಿಂದ ಕಡಿತಗೊಂಡಿದೆ. ಬಿಲ್ ಪಾವತಿ ಮಾಡದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇದರಿಂದಾಗಿ, ಕಚೇರಿಯ ಕೆಲಸಗಳು ಸ್ಥಗಿತಗೊಂಡಿವೆ ಎಂದು ಕಚೇರಿಗೆ ಭೇಟಿ ಕೊಟ್ಟವರು ದೂರಿದ್ದಾರೆ.
‘ಬಿಎಸ್ಎನ್ಎಲ್ ಸಂಪರ್ಕ ಇರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಕೆಪಿಎಸ್ಸಿ ಮೂಲಗಳು ಹೇಳಿವೆ.