ವಿಜಿನಾಪುರ ವಾರ್ಡಿನ ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಪಾಲಿಕೆಯ ಅನುಮತಿಯಿಲ್ಲದೆ ಖಾಸಗಿ ಟೆಲಿಕಾಂ ಸಂಸ್ಥೆ ಅಂತರ್ಜಾಲ ಸೇವೆ ಒದಗಿಸಲು ಕೇಬಲ್ ಅಳವಡಿಸುತ್ತಿದೆ. ಈ ಮಾಹಿತಿ ತಿಳಿದು ಪಾಲಿಕೆ ಸದಸ್ಯ ಬಂಡೆ ಎಸ್.ರಾಜು ಅವರು ಕಾಮಗಾರಿ ನಡೆಸುವ ಯಂತ್ರಗಳನ್ನು ವಶಕ್ಕೆ ಪಡೆದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ, ಪ್ರಕರಣ ದಾಖಲಾಗಿಲ್ಲ.