ಬಾಲ್ಯ ವಿವಾಹಕ್ಕೆ ತಡೆ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಭ್ರೂಣ ಹತ್ಯೆಗೆ ವಿರೋಧ, ಶುಚಿತ್ವ ಹಾಗೂ ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಎಡಿಜಿಪಿ ಭಾಸ್ಕರ್ರಾವ್ ನೇತೃತ್ವದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯಿಂದ ಬುಧವಾರ
(ಡಿ. 5ರಂದು) ಹೊರಟಿದ್ದ ಜಾಥಾ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಮಾರ್ಗವಾಗಿ
545 ಕಿ.ಮೀ ಸಂಚರಿಸಿತು.