‘ಡಿ.ಜೆ. ಹಳ್ಳಿ ನಿವಾಸಿಯಾಗಿದ್ದ ಪ್ರೇಮ್ ಕುಮಾರ್ ಸಾವಿಗೆ ಕಟ್ಟಡದ ಮಾಲೀಕ ರಂದೀಪ್ ವಿಶ್ವಕರ್ಮ, ಎಂಜಿನಿಯರ್ ಸತೀಶ್ ವಿಶ್ವಕರ್ಮ ಹಾಗೂ ಗುತ್ತಿಗೆದಾರ ಶೇಖರ್ ಅವರೇ ಕಾರಣ. ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಮೃತರ ತಂದೆಡಿ. ಪುನಿಯಾ ದೂರು ನೀಡಿದ್ದಾರೆ. ‘ನಿರ್ಲಕ್ಷ್ಯದಿಂದ ಸಾವು (ಐಪಿಸಿ 304)’ ಆರೋಪದಡಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.