ರಾಜಕೀಯ ತೊಳಲಾಟದಲ್ಲಿ ಮುಳುಗಿರುವ ಸರ್ಕಾರಕ್ಕೆ, ವರ್ಗಾವಣೆಯ ನೆನಪು ಇದ್ದಂತಿಲ್ಲ. ಮಾತೆತ್ತಿದರೆ ‘ಗುಣಾತ್ಮಕ ಶಿಕ್ಷಣ ನಮ್ಮ ಗುರಿ’ ಎನ್ನುವ ಸರ್ಕಾರವು ಗುಣಾತ್ಮಕ ಶಿಕ್ಷಣಕ್ಕೆ ಪ್ರಮುಖ ಕಾರಣರಾಗಿರುವ ಶಿಕ್ಷಕರಿಗೆ ವರ್ಗಾವಣೆಯ ಅವಕಾಶ ಕಲ್ಪಿಸದೇ ಸತಾಯಿಸುತ್ತಿರುವುದು ಅನ್ಯಾಯದ ಪರಮಾವಧಿಯೇ ಸರಿ. ವರ್ಗಾವಣೆ ಮಾಡುವ ಇರಾದೆ ಇಲ್ಲದಿದ್ದರೆ ನೇರವಾಗಿ ಹೇಳಿದರೆ ಎಲ್ಲರೂ ನೆಮ್ಮದಿಯಿಂದಾದರೂ ಇರುತ್ತಾರೆ.