‘ಮರದ ಕಲಾಕೃತಿಗಳಿಗೆ ಚಿಕಿತ್ಸೆ ನೀಡಿ, ಸಂರಕ್ಷಿಸುವ ಕಾರ್ಯವನ್ನು ‘ಪ್ಲೈವುಡ್ ಸಂಶೋಧನಾ ಸಂಸ್ಥೆ’ಗೆ ನೀಡಲಾಗಿದ್ದು, ಈಗಾಗಲೇ ₹2.25 ಲಕ್ಷ ನೀಡಲಾಗಿದೆ. ವಿಜ್ಞಾನಿ ಡಾ.ನರಸಿಂಹಮೂರ್ತಿ ನೇತೃತ್ವದ ತಂಡ ಮೂರು ತಿಂಗಳುಗಳ ಹಿಂದೆ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ’ ಎಂದು ತೋಟಗಾರಿಕೆ ಇಲಾಖೆಯಜಂಟಿ ನಿರ್ದೇಶಕ ಎಂ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.