ಮೌದ್ಗಿಲ್ ವರ್ಗಾವಣೆ ನಂತರ ಆ ಜಾಗಕ್ಕೆ ವರ್ಗಾವಣೆಯಾಗಿದ್ದ ಎಂ.ಟಿ.ರೇಜು ಅವರ ವರ್ಗಾವಣೆಯನ್ನು ರದ್ದುಪಡಿಸಿ, ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಹುದ್ದೆಯಲ್ಲೇ ಮುಂದುವರಿಸಲಾಗಿತ್ತು. ನಂತರ ಈ ಜಾಗಕ್ಕೆ ವರ್ಗಾವಣೆಯಾಗಿದ್ದ, ಉಜ್ವಲ್ಕುಮಾರ್ ಘೋಷ್ ಗುರುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದು, ಒಂದೇ ದಿನಕ್ಕೆ ಎತ್ತಂಗಡಿ ಮಾಡಲಾಗಿದೆ.