ವಾರದಲ್ಲಿ ಮೂರು ದಿನ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಓದು– ಬರಹ ಹಾಗೂ ಸರಳ ಗಣಿತ (ಲೆಕ್ಕಾಚಾರ) ಹೇಳಿಕೊಡಲಾಗುತ್ತದೆ. ಒಂದು ವರ್ಷಗಳ ಕಾಲ ತರಗತಿಗಳು ನಡೆಯಲಿವೆ. ಜೈಲಿನಿಂದ ಬಿಡುಗಡೆಯಾಗುವ ಕೈದಿಗಳು ಅಕ್ಷರಸ್ಥರಾಗಿರುವುದು ಮಾತ್ರವಲ್ಲ, ಸ್ವಂತ ಉದ್ಯೋಗ ನಡೆಸಲು ಸಹ ಶಕ್ತರಾಗಿರಬೇಕು ಎಂಬುದು ಇದರ ಉದ್ದೇಶವಾಗಿದೆ. ಆದ್ದರಿಂದ ಸಾಕ್ಷರತೆಯ ಕಾರ್ಯಕ್ರಮದ ಜೊತೆಗೆ ಉಪ್ಪಿನಕಾಯಿ, ಪೇಪರ್ ಕೈಚೀಲ, ಮೊಂಬತ್ತಿ ಹಾಗೂ ಜಾಮೂನು ಪೌಡರ್ ತಯಾರಿಕೆ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ.