ಬೆಂಗಳೂರು: ಹೆಬ್ಬಾಳದ ದೇವಿನಗರ ಕ್ರಾಸ್ನಲ್ಲಿ ಬುಧವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಶಿವರಾಜ್ (28) ಹಾಗೂ ಮುನೇಂದ್ರ (30) ಎಂಬುವರು ಮೃತಪಟ್ಟಿದ್ದಾರೆ.
ಅಮೃತಹಳ್ಳಿ ನಿವಾಸಿಗಳಾದ ಇವರು, ರಾತ್ರಿ 9.30ರ ಸುಮಾರಿಗೆ ಬೈಕ್ನಲ್ಲಿ ಸ್ನೇಹಿತನ ಮನೆಗೆ ಹೊರಟಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ, ತಿರುವಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದಾಗ ಮೈಮೇಲೆ ಚಕ್ರ ಹರಿದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಬ್ಬಾಳ ಸಂಚಾರ ಪೊಲೀಸರು ಚಾಲಕನನ್ನು ಬಂಧಿಸಿ, ಲಾರಿ ಜಪ್ತಿ ಮಾಡಿದ್ದಾರೆ.