ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರಿನಲ್ಲಿ ಜನರೆದುರು ಮೊಟ್ಟೆ ಇಟ್ಟ ನಾಗರಹಾವು

Last Updated 22 ಮಾರ್ಚ್ 2019, 4:16 IST
ಅಕ್ಷರ ಗಾತ್ರ

ಮದ್ದೂರು: ಉರಿ ಬಿಸಿಲಿನಲ್ಲೇ ಪಟ್ಟಣದ ಶಿಕ್ಷಕರ ಬಡಾವಣೆ ರಸ್ತೆಯಲ್ಲಿ ಜನರ ಎದುರು ನಾಗರಹಾವೊಂದು ಮೊಟ್ಟೆ ಇಟ್ಟ ಅಪರೂಪದ ಪ್ರಸಂಗ ಗುರುವಾರ ನಡೆದಿದೆ.

ಶಿಕ್ಷಕರ ಬಡಾವಣೆಯ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಉರಗ ಪ್ರೇಮಿ ಮಾ.ನಾ.ಪ್ರಸನ್ನ ಕುಮಾರ್ ಅವರಿಗೆ ಸ್ಥಳೀಯರು ಕರೆಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು, ಹಾವು ಹಿಡಿದು ಬಯಲಿನಲ್ಲಿ ಬಿಟ್ಟಾಗ ಮೊಟ್ಟೆ ಇಡಲು ಆರಂಭಿಸಿತು.

ಯಾರೂ ಕಾಣಿಸದ ಪ್ರದೇಶದಲ್ಲಿ ಮೊಟ್ಟೆ ಇಡುವ ಹಾವು, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜನರ ಎದುರಿಗೆ ಸುಮಾರು 14 ಮೊಟ್ಟೆ ಇಟ್ಟು ಅಚ್ಚರಿಗೆ ಕಾರಣವಾಯಿತು.

ಮೊಟ್ಟೆ ಇಟ್ಟ ನಂತರ ಹಾವನ್ನು ಕಾಡಿಗೆ ಬಿಡಲಾಗಿದ್ದು, ಮೊಟ್ಟೆಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಮೊಟ್ಟೆಯಿಂದ ಹಾವಿನ ಮರಿ ಹೊರಗೆ ಬಂದ ನಂತರ ಕಾಡಿಗೆ ಬಿಡುವುದಾಗಿ ಪ್ರಸನ್ನಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT