ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ವಿ.ಸುರೇಶ್ ನಾಡಗೌಡರ್,‘ಗಾಂಧೀಜಿ ತತ್ವ, ಸಿದ್ಧಾಂತ ಹಾಗೂ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತ. ಅವರ ಸತ್ಯ, ಅಹಿಂಸೆ, ಸರಳ ಜೀವನ, ಗ್ರಾಮ ಸ್ವರಾಜ್ಯದ ಕನಸಿನ ತತ್ವಾದರ್ಶಗಳು ವಿಶ್ವಕ್ಕೆ ಪರಿಚಿತವಾಗಿವೆ. ಇವುಗಳನ್ನು ಅಳವಡಿಸಿಕೊಂಡರೆ ಮೌಲ್ಯಾಧಾರಿತ ಜೀವನ ನಡೆಸಬಹುದು’ ಎಂದರು.