ಕಾರ್ಯಕ್ರಮ ಉದ್ಘಾಟಿಸಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ‘ಪ್ರಕೃತಿ, ನಾಡು, ನದಿ, ಪರಿಸರ ಕಲೆಯನ್ನು ಸ್ತ್ರೀರೂಪದಲ್ಲಿ ಕಾಣುತ್ತೇವೆ. ಪ್ರಕೃತಿಯೇ ನಮ್ಮ ಪರಂಪರೆಯ ಉಳಿಯುವಿಕೆಗೆ ಕಾರಣ. ಮಹಿಳೆಗೆ ಸಮಪಾಲು, ಸಮಾನ ಗೌರವ, ಅಧಿಕಾರ ನೀಡಬೇಕು. ಆಗ ಮಾತ್ರ ಗ್ರಾಮೀಣ ಸಂಸ್ಕೃತಿ, ಇತಿಹಾಸ ಉಳಿಯುವ ಮೂಲಕ ಕಲಾಪ್ರೇಮ, ರಾಷ್ತ್ರಪ್ರೇಮ, ಸಂಸ್ಕೃತಿ ಉಳಿಯುತ್ತದೆ ಎಂದರು.