ಇದೇ 27ರಂದು ಮುಂಜಾನೆ ಕಾರಿನಲ್ಲಿ ಯುವತಿಯೊಬ್ಬಳ ಜೊತೆ ಬಂದಿದ್ದ ಉದ್ಯಮಿ ನಿತ್ಯಾನಂದ ಆಶ್ರಮದ ಬಳಿ ಕುಡಿದು ಗಲಾಟೆ ಮಾಡಿದ್ದರು. ಆಶ್ರಮದ ಬಳಿ ಇದ್ದ ದೇವರ ವಿಗ್ರಹಕ್ಕೆ ಬಿಯರ್ ಸುರಿದಿದ್ದರು. ನಂತರ ಆಶ್ರಮದ ವ್ಯಕ್ತಿಯೊಬ್ಬರ ಮೇಲೆ ಬಾಟಲ್ ಎಸೆದಿದ್ದರು. ಈ ಕುರಿತು ಅಲ್ಲಿನ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.