ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

Last Updated 3 ಮಾರ್ಚ್ 2019, 19:29 IST
ಅಕ್ಷರ ಗಾತ್ರ

ಬೆಂಗಳೂರು: ಶಿವರಾತ್ರಿ ಹಬ್ಬದ ಆಚರಣೆಗೆ ಅವಶ್ಯವಾಗಿ ಬೇಕಾದ ಹಣ್ಣು ಹಾಗೂ ಇತರ ಸಾಮಗ್ರಿಗಳ ದರ ತುಸು ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಈ ಬಾರಿ ಅವಧಿಗೂ ಮುನ್ನ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ನೀರಿನ ಅಭಾವದಿಂದ ಹಣ್ಣು, ತರಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿಬಿಲ್ವಪತ್ರೆ ಒಂದು ಕಂತಿಗೆ ₹100 ಹಾಗೂ ಮಾವಿನ ಎಲೆಗಳ ಕಟ್ಟು ₹50ಕ್ಕೆ ಮಾರಾಟವಾಗುತ್ತಿದ್ದವು. ಅಲ್ಲದೇ,ಏಲಕ್ಕಿ ಬಾಳೆಹಣ್ಣುಭಾನುವಾರ, ₹60 ರಿಂದ 70ಕ್ಕೆ ಮಾರಾಟವಾದರೆ, ಹಾಪ್‌ಕಾಮ್ಸ್‌ನಲ್ಲಿ ₹45 ಹಾಗೂ ಪಚ್ಚಬಾಳೆ ₹25ಕ್ಕೆ ಮಾರಾಟವಾಗುತ್ತಿತ್ತು. ಅಲ್ಲದೇ, ಸೇಬು, ಕಿತ್ತಳೆ, ಮೋಸಂಬಿ ಸೇರಿದಂತೆ ಬಹುತೇಕ ಹಣ್ಣುಗಳ ಬೆಲೆಯೂ ಏರಿಕೆ ಕಂಡಿವೆ.

‘ಸಗಟು ದರದಲ್ಲಿ, ಸೇಬು ₹65, ದ್ರಾಕ್ಷಿ ₹70, ಮೋಸಂಬಿ ₹40 ಕಿತ್ತಳೆ ₹45 ಹಾಗೂ ಕಲ್ಲಂಗಡಿ ₹8ಕ್ಕೆ ಮಾರಾಟವಾಗುತ್ತಿದೆ’ ಎಂದು ಸಿಂಗನಹಳ್ಳಿ ಅಗ್ರಹಾರದ ಎಪಿಎಂಸಿ ಹಣ್ಣುಗಳ ಮಾರುಕಟ್ಟೆ ಕಾರ್ಯದರ್ಶಿ ವಿ.ಸಿದ್ಧಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT