ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ‘ಜಾತಿ, ಲಿಂಗ, ವರ್ಣ ಭೇದವಿಲ್ಲದ ಸಮ ಸಮಾಜ ನಿರ್ಮಾಣದ ಆಶಯವನ್ನು ವಚನಗಳಲ್ಲಿ ಕಾಣಬಹುದು. ವಚನಗಳ ಈ ತತ್ವವನ್ನೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂವಿಧಾನಕ್ಕೆ ಗಂಡಾಂತರ ಉಂಟಾದರೆ, ಅದು ವಚನಗಳಿಗೆ ಎದುರಾದ ಅಪಾಯವೆಂದೇ ಭಾವಿಸಬೇಕು’ ಎಂದು ಅಭಿಪ್ರಾಯಪಟ್ಟರು.