ಬೆಂಗಳೂರು: ಶಾಂತಿನಗರದ ಸ್ಮಶಾನದಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಡೆಸದ ಗುತ್ತಿಗೆದಾರನಿಗೆ ಮೇಯರ್ ಗಂಗಾಂಬಿಕೆ ಅವರು ಶನಿವಾರ ₹ 50 ಸಾವಿರ ದಂಡ ವಿಧಿಸಿದರು.
ಮೇಯರ್ ಅವರು ಸ್ಮಶಾನಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಪಾದಚಾರಿ ಮಾರ್ಗ ಹಾಗೂ ರಸ್ತೆ ಮೇಲೆ ಕಸದ ರಾಶಿ ಹಾಗೆಯೇ ಇದ್ದುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸ ವಿಲೇವಾರಿ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆಯುತ್ತಿರುವ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ವೀಕ್ಷಿಸಿದರು.