<p><strong>ಬೆಂಗಳೂರು:</strong>ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡಬೇಕು ಎಂದು ಬಯಸುವವರಿಗೆ ಕಬ್ಬನ್ ಪಾರ್ಕ್ನಲ್ಲಿ ಶೀಘ್ರದಲ್ಲೇ ‘ಪವಿತ್ರವನ’ ನಿರ್ಮಾಣ ಮಾಡಲಾಗುತ್ತಿದೆ.</p>.<p>ಧ್ಯಾನಕ್ಕೆ ಪೂರಕವಾದ ವಾತಾವರಣವನ್ನು ಪಾರ್ಕ್ನಲ್ಲಿ ಸೃಷ್ಟಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲಾಖೆಯ ಕಚೇರಿಯ ನರ್ಸರಿ ಬಳಿಯ ಒಂದು ಎಕರೆಯಲ್ಲಿ ‘ಪವಿತ್ರವನ’ ತಲೆ ಎತ್ತಲಿದೆ.</p>.<p>200 ಬಗೆಯ 350ರಿಂದ 400 ಔಷಧಿ ಸಸ್ಯಗಳನ್ನು ಈ ಪ್ರದೇಶದಲ್ಲಿ ಬೆಳೆಸಲಾಗುತ್ತದೆ.</p>.<p>ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಈ ಥೀಮ್ ಪಾರ್ಕ್ ನೀಲನಕ್ಷೆಯನ್ನು ವಿನ್ಯಾಸಗೊಳಿಸಿದ್ದು, ಇಲ್ಲಿ ನೆಡಲು ಉದ್ದೇಶಿಸಿರುವ ಸಸಿಗಳನ್ನೂ ಅವರೇ ಆಯ್ಕೆ ಮಾಡಿದ್ದಾರೆ.</p>.<p>‘ಈಗ ಗುಂಡಿಗಳನ್ನು ತೋಡಲು ಪ್ರಾರಂಭಿಸಿದ್ದು, ಮುಂದಿನ ವಾರದ ವೇಳೆಗೆ ಸಸಿಗಳನ್ನು ನೆಡಲಿದ್ದೇವೆ.</p>.<p>ಔಷಧೀಯ ಗುಣಗಳನ್ನು ಹೊಂದಿರುವ ಈ ಸಸ್ಯಗಳನ್ನು ಬಿಳಿಗಿರಿರಂಗನ ಬೆಟ್ಟ ಮತ್ತು ರಾಜ್ಯದ ಇತರೆ ಕಡೆಗಳಿಂದ ತರಿಸಲಾಗಿದೆ.</p>.<p>ಈ ಉದ್ಯಾನವನ್ನು ನಿರ್ವಹಣೆ ಮಾಡುವುದಕ್ಕೆ ಮಾತ್ರ ಇಲಾಖೆಯ ಪಾತ್ರ ಸೀಮಿತವಾಗಿದೆ’ ಎಂದು ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.</p>.<p>ವಿವಿಧ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ಯೋಜನೆಗೆ ಹಣ ವಿನಿಯೋಗಿಸುತ್ತಿವೆ. ಸಸಿಗಳನ್ನು ಅವರೇ ತರುತ್ತಿದ್ದಾರೆ.</p>.<p>ನಾಗಲಿಂಗ ಪುಷ್ಪ, ನಾಗಸಂಪಿಗೆ, ಬ್ರಹ್ಮವೃಕ್ಷ, ಸೀತಾ ಅಶೋಕ, ಬಿಲ್ವಪತ್ರೆ, ಅಶೋಕ ವೃಕ್ಷ, ಕೆಂಡಸಂಪಿಗೆ ಮತ್ತು ಬನ್ನಿ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತದೆ ಎಂದು ಮುರಗೋಡ ತಿಳಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡಬೇಕು ಎಂದು ಬಯಸುವವರಿಗೆ ಕಬ್ಬನ್ ಪಾರ್ಕ್ನಲ್ಲಿ ಶೀಘ್ರದಲ್ಲೇ ‘ಪವಿತ್ರವನ’ ನಿರ್ಮಾಣ ಮಾಡಲಾಗುತ್ತಿದೆ.</p>.<p>ಧ್ಯಾನಕ್ಕೆ ಪೂರಕವಾದ ವಾತಾವರಣವನ್ನು ಪಾರ್ಕ್ನಲ್ಲಿ ಸೃಷ್ಟಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲಾಖೆಯ ಕಚೇರಿಯ ನರ್ಸರಿ ಬಳಿಯ ಒಂದು ಎಕರೆಯಲ್ಲಿ ‘ಪವಿತ್ರವನ’ ತಲೆ ಎತ್ತಲಿದೆ.</p>.<p>200 ಬಗೆಯ 350ರಿಂದ 400 ಔಷಧಿ ಸಸ್ಯಗಳನ್ನು ಈ ಪ್ರದೇಶದಲ್ಲಿ ಬೆಳೆಸಲಾಗುತ್ತದೆ.</p>.<p>ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಈ ಥೀಮ್ ಪಾರ್ಕ್ ನೀಲನಕ್ಷೆಯನ್ನು ವಿನ್ಯಾಸಗೊಳಿಸಿದ್ದು, ಇಲ್ಲಿ ನೆಡಲು ಉದ್ದೇಶಿಸಿರುವ ಸಸಿಗಳನ್ನೂ ಅವರೇ ಆಯ್ಕೆ ಮಾಡಿದ್ದಾರೆ.</p>.<p>‘ಈಗ ಗುಂಡಿಗಳನ್ನು ತೋಡಲು ಪ್ರಾರಂಭಿಸಿದ್ದು, ಮುಂದಿನ ವಾರದ ವೇಳೆಗೆ ಸಸಿಗಳನ್ನು ನೆಡಲಿದ್ದೇವೆ.</p>.<p>ಔಷಧೀಯ ಗುಣಗಳನ್ನು ಹೊಂದಿರುವ ಈ ಸಸ್ಯಗಳನ್ನು ಬಿಳಿಗಿರಿರಂಗನ ಬೆಟ್ಟ ಮತ್ತು ರಾಜ್ಯದ ಇತರೆ ಕಡೆಗಳಿಂದ ತರಿಸಲಾಗಿದೆ.</p>.<p>ಈ ಉದ್ಯಾನವನ್ನು ನಿರ್ವಹಣೆ ಮಾಡುವುದಕ್ಕೆ ಮಾತ್ರ ಇಲಾಖೆಯ ಪಾತ್ರ ಸೀಮಿತವಾಗಿದೆ’ ಎಂದು ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.</p>.<p>ವಿವಿಧ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ಯೋಜನೆಗೆ ಹಣ ವಿನಿಯೋಗಿಸುತ್ತಿವೆ. ಸಸಿಗಳನ್ನು ಅವರೇ ತರುತ್ತಿದ್ದಾರೆ.</p>.<p>ನಾಗಲಿಂಗ ಪುಷ್ಪ, ನಾಗಸಂಪಿಗೆ, ಬ್ರಹ್ಮವೃಕ್ಷ, ಸೀತಾ ಅಶೋಕ, ಬಿಲ್ವಪತ್ರೆ, ಅಶೋಕ ವೃಕ್ಷ, ಕೆಂಡಸಂಪಿಗೆ ಮತ್ತು ಬನ್ನಿ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತದೆ ಎಂದು ಮುರಗೋಡ ತಿಳಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>