ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೆರೆ ಪ್ರದೇಶ ಒತ್ತುವರಿಯಾಗಿಲ್ಲ ಎಂದು ಬಿಬಿಎಂಪಿ ವಾದಿಸುತ್ತಿದೆ. ಆದರೆ, ಅರ್ಜಿದಾರರು ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗಾಗಿ, ಕೆರೆಯ ಪ್ರದೇಶವು ಒತ್ತುವರಿ ಆಗಿದೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಸರ್ಕಾರ 8 ವಾರಗಳಲ್ಲಿ ಸರ್ವೆ ಕಾರ್ಯ ನಡೆಸಬೇಕು. ಈ ಸಮಯದಲ್ಲಿ ಅರ್ಜಿದಾರರು, ಬಿಡಿಎ ಹಾಗೂ ಬಿಬಿಎಂಪಿ ಎಂಜಿನಿಯರ್ಗಳು ಹಾಜರಿರಬೇಕು’ ಎಂದು ಆದೇಶಿಸಿತು.