ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಹಸಿರುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ತಿಮ್ಮೇಗೌಡ, ಉಪಾಧ್ಯಕ್ಷರಾಗಿ ಎಸ್.ಸಿದ್ದರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರಾಗಿ ಶಿವಶಂಕರಯ್ಯ, ಪರಮೇಶ್, ತಿಮ್ಮಯ್ಯ, ಸಿದ್ದಲಿಂಗಯ್ಯ, ವಿ.ನಂಜುಂಡಯ್ಯ, ಬೈಲಪ್ಪ, ಜಯಮ್ಮ, ಶಿವಮ್ಮ ಮತ್ತು ನಾರಾಯಣಸ್ವಾಮಿ ಅವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಮುಖಂಡ ಹೆಚ್.ಎಂ.ಕುಮಾರ್,‘ರೈತರು ಗುಣಮಟ್ಟದ ಹಾಲನ್ನು ಪೂರೈಸಿ, ಸಂಘವು ಲಾಭದತ್ತ ಸಾಗಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.