‘ಮೂಕಜ್ಜಿ ನೋವುಂಡ ಜೀವ. ಆದರೆ, ಆಕೆ ಅದನ್ನು ಕಹಿ ಎಂದು ಸ್ವೀಕರಿಸುವುದಿಲ್ಲ. ಆ ನೋವೇ ಲೋಕದೃಷ್ಟಿಯನ್ನು ಬೆಳೆಸಿ ಅವಳನ್ನು ಪಕ್ವವಾಗಿಸುತ್ತದೆ. ನೋವನ್ನು ಹೇಳಿಕೊಳ್ಳಲಾಗದೆ ಆಕೆ ಮೌನವಾಗುತ್ತಾಳೆ. ಸಂಕಟಗಳನ್ನೆಲ್ಲಾ ಒಳಗೆ ತೆಗೆದುಕೊಳ್ಳುತ್ತಾಳೆ. ಅದು ಮೂಕಜ್ಜಿಗೆ ಒಳನೋಟವೊಂದನ್ನು ಒದಗಿಸುತ್ತದೆ. ಅದನ್ನು ಶೇಷಾದ್ರಿ ಸಿನಿಮಾದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ’ ಎಂದರು.