ಸಹಕಾರ್ಮಿಕರ ಜತೆ ರಾತ್ರಿ ಕೇಬಲ್ ಅಳವಡಿಕೆ ಕೆಲಸದಲ್ಲಿ ನಿರತರಾಗಿದ್ದ ಶಿವನಾಯಕ್, ಸ್ವಲ್ಪ ಸಮಯದ ಬಳಿಕ ಏಕಾಏಕಿ ನಾಪತ್ತೆಯಾಗಿದ್ದರು. ಕಾರ್ಮಿಕರು ಅವರನ್ನು ಹುಡುಕಿಕೊಂಡು ಹೊರಟಾಗ, ಎಂಜಿನಿಯರಿಂಗ್ ಕಚೇರಿ ಎದುರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.