ಸಹಜ ಸಾವೆಂದು ನಾಟಕವಾಡಿದಳು: ‘ಜ. 2ರಂದು ಪತಿ ಮಂಜುನಾಥ್ಗೆ ಕರೆ ಮಾಡಿದ್ದ ಆರೋಪಿ ಕವಿತಾ, ‘ಬೆಳಿಗ್ಗೆ ತಿಂಡಿ ತಿಂದು ಮಲಗಿದ್ದ ಸುಬ್ರಮಣಿ, ವಾಪಸ್ ಎದ್ದಿಲ್ಲ. ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ’ ಎಂದಿದ್ದಳು. ಅದು ನಿಜವೆಂದು ತಿಳಿದಿದ್ದ ಮಂಜುನಾಥ್, ಅಕ್ಕ ಇಂದ್ರಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನಂತರ, ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.