ದುರಸ್ತಿ ಕಾರ್ಯದ ಸಲುವಾಗಿ ಎಂ.ಜಿ.ರಸ್ತೆ– ಇಂದಿರನಗರನಿಲ್ದಾಣಗಳ ನಡುವೆ ಮೆಟ್ರೊ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಮೆಟ್ರೊ ಪ್ರಯಾಣಿಕರಿಗೆ ಕಬ್ಬನ್ಪಾರ್ಕ್ ನಿಲ್ದಾಣ– ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ಉಚಿತ ಬಸ್ ವ್ಯವಸ್ಥೆ ಒದಗಿಸಲಾಗಿತ್ತು. ಮೆಟ್ರೊ ನಿಲ್ದಾಣದಲ್ಲಿ ಇಳಿದ ಬಹುತೇಕ ಪ್ರಯಾಣಿಕರು ಬಸ್ಗಳ ಮೊರೆ ಹೋದರು. ಬಸ್ಗಳು ಅರೆ ಕ್ಷಣದಲ್ಲೇ ತುಂಬಿದ್ದರಿಂದ ಕೆಲವು ಪ್ರಯಾಣಿಕರು ಮುಂದಿನ ಬಸ್ಗಾಗಿ ಕಾಯಬೇಕಾಯಿತು.