‘ರಾಜಕಾರಣಿಗಳು, ಅಧಿಕಾರಶಾಹಿ ವರ್ಗ ಸಂವೇದನೆಯನ್ನು ಉಳಿಸಿಕೊಂಡಾಗ ಮಾತ್ರ ಮಾನವಕುಲಕ್ಕೆ ಒಳಿತು ಮಾಡಲು ಸಾಧ್ಯ. ಸದಾ ಹಣ, ಅಧಿಕಾರದ ಬೆನ್ನತ್ತಿ ಹೋಗುತ್ತಿದ್ದಾರೆ. ಅಧಿಕಾರ, ಸಮಾಜ ಅಭಿವೃದ್ಧಿಯ ಕನಸುಗಳಿದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಆದರೆ, ನಮ್ಮ ಸುತ್ತಮುತ್ತ ಬರೀ ಕ್ರೌರ್ಯ, ಹಿಂಸೆ, ಅಸಹನೆ, ಅಸಮಾಧಾನವೇ ಆವರಿಸಿಕೊಂಡಿದ್ದು, ಸಂತೋಷಪಡುವ ಮನೋಭಾವವನ್ನೇ ಕಳೆದುಕೊಂಡಿದ್ದೇವೆ. ಸಮಾಜ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದೆ’ ಎಂದು ವಿಷಾದಿಸಿದರು.