ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ಪೂಜೆಗೆ ಸೀಮಿತವಾದ ಕಾಮಗಾರಿ

Last Updated 13 ಜನವರಿ 2019, 20:14 IST
ಅಕ್ಷರ ಗಾತ್ರ

ನೆಲಮಂಗಲ: ಪಟ್ಟಣದ ವಾಜರಹಳ್ಳಿ ರಸ್ತೆಯ ಶೇಷು ಬಡಾವಣೆಯ ರಸ್ತೆ ದುರಸ್ತಿಗೆ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ.

ಡಿ. 4ರಂದು ಪೂಜೆಯ ದಿನ ರಸ್ತೆಯನ್ನು ಜೆಸಿಬಿ ಮೂಲಕ ಅಗೆದುಹಾಕಲಾಯಿತು. ಈಗ ಜನರಿಗೆ ಹೊಸರಸ್ತೆಯೂ ಇಲ್ಲ. ಮಣ್ಣಿನ ರಸ್ತೆಯೂ ಇಲ್ಲವಾಗಿದೆ.

ದಪ್ಪ ಕಲ್ಲು, ಮಣ್ಣಿನ ಹೆಂಟೆಗಳು ರಸ್ತೆಯೆಲ್ಲ ಹರಡಿಕೊಂಡು ನಡೆದಾಡುವುದೂ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರೂ
ಕಷ್ಟಪಡುತ್ತಿದ್ದಾರೆ.

‘ಬಡಾವಣೆಯ ಕೊನೆಗೆ ಹೋದರೆ ರಸ್ತೆಯನ್ನೆಲ್ಲ ಗಿಡ ಗಂಟೆಗಳು ಆವರಿಸಿಕೊಂಡು, ಕಾಲುದಾರಿ ಮಾತ್ರ ಕಾಣುತ್ತದೆ. ಇದೊಂದು ಮೂಗಿಗೆ ತುಪ್ಪ ಸವರುವ ಕೆಲಸದಂತಾಗಿದೆ’ ಎನ್ನುತ್ತಾರೆ ಶ್ಯಾಮರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT