‘ಕಥೆಗಳಲ್ಲಿ ನಾನು ಸೃಷ್ಟಿಸಿದ ಪಾತ್ರಗಳು ಕಣ್ಣೆದುರು ಕಾಣಿಸಿಕೊಂಡಾಗ ಖುಷಿ ಕೊಟ್ಟಿವೆ. ಬದುಕಿನ ಬಗ್ಗೆ ಪ್ರೀತಿ ಹುಟ್ಟಿಸಿವೆ. ಪ್ರತಿ ಕಥೆ ಹೊಸ ಓದನ್ನು ನೀಡುವಂಥದ್ದು. ಮುಕ್ತಾಯದ ಹಂತ ಸುಲಭವಾಗಿ ಆಗದೇ ಅನುರಣನೀಯವಾಗಿರಬೇಕು. ಕುವೆಂಪು, ಕಾರಂತ, ಲಂಕೇಶ್ ನನ್ನಲ್ಲಿ ಬದುಕಿನ ಜಿಜ್ಞಾಸೆಯನ್ನು ಹೆಚ್ಚಿಸಿದವರು. ಕುವೆಂಪು–ಕಾರಂತರ ಬಗ್ಗೆ ವಿಚಾರ ಸಂಕಿರಣ ಮಾಡುವ ಅಗತ್ಯವಿಲ್ಲ. ಅವರನ್ನು ಓದಿದರೆ ಸಾಕು. ಮನುಷ್ಯ ಲೋಕಕ್ಕೆ, ಈ ಶತಮಾನಕ್ಕೆ ಬೇಕಾದ ಎಲ್ಲ ಅಗತ್ಯಗಳೂ ಅವರ ಕೃತಿಗಳಲ್ಲಿವೆ’ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.